Featured News Posts

Recent News

ಗ್ರಾಹಕರ ಸಹಕಾರದಿಂದ ಬ್ಯಾಂಕ್ಗಳ ಅಸ್ತಿತ್ವ

ಯಮಕನಮರಡಿ 25: ರಾಷ್ಟ್ತ್ರೀಕೃತ ಬ್ಯಾಂಕ್ ಇಂದು ಗ್ರಾಮ ಮಟ್ಟದಲ್ಲಿ ಅಸ್ತಿತ್ವವನ್ನು ಹೊಂದಬೇಕಾದರೆ ಗ್ರಾಹಕರ ಸಹಕಾರದಿಂದ ಮಾತ್ರ ಸಾಧ್ಯವಾಗಿದೆ ಎಂದು ಪಟ್ಟಣದ ಆರ್ಯುವೇದಿಕ ವೈದ್ಯರಾದ ಡಾ.ಧನಪಾಲ ಪಾಟೀಲ ಹೇಳಿದರು. ಅವರು ಪಟ್ಟಣದಲ್ಲಿ ಗುರುವಾರ ನಡೆದ ಸಿಂಡಿಕೇಟ್ ಬ್ಯಾಂಕ್ನ ಗ್ರಾಹಕರ ಮೇಳ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಪ್ರತಿಯೊಬ್ಬ ಮನುಷ್ಯನಿಗೆ ಇಂದು ಆರ್ಥಿಕ ಮಟ್ಟದಿಂದ ಸುಧಾರಣೆಯಾಗಬೇಕಾದರೆ ಬ್ಯಾಂಕ್ ನೆರವು ಅವಶ್ಯ ಅದರಂತೆ ಗ್ರಾಹಕರು ಮರಪಾವತಿ ಮಾಡಲು ಕೂಡ ಸಹಕರಿಸಿ ಎಂದು ಹೇಳಿದರು. ಸಿಇಎಸ್ ಅನುದಾನಿತ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ [...]

Continue Reading →

ಬಿತ್ತನೆ ಬೀಜಃ ರಸಗೊಬ್ಬರ ಮಾರಾಟ ಪ್ರಾರಂಭ

ಬೆಳಗಾವಿ 25: ಬೆಳಗಾವಿ ಜಿಲ್ಲೆಯ 35 ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಹೆಚ್ಚುವರಿ 68 ಕೇಂದ್ರಗಳಲ್ಲಿ ಮುಂಗಾರು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಶ್ರೀ ಎನ್ ಜಯರಾಂ ಅವರು ತಿಳಿಸಿದರು. ಅವರು ಇಂದು ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಬೀಜ ಗೊಬ್ಬರದ ದಾಸ್ತಾನು ಮಾಹಿತಿ ಪಡೆದರು. ಅವರು ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳು ರಜೆ ದಿನಗಳಲ್ಲಿ ಮತ್ತು ರೈತರ ಬೇಡಿಕೆ ಅನುಸಾರವಾಗಿ ತೆರೆದಿಟ್ಟು, ಮಾರಾಟ ಪ್ರಕ್ರಿಯೇ ನಡೆಸಬೇಕೆಂದು [...]

Continue Reading →

ಕನ್ನಡ ಗಡಿ ಭವನದ ಚರಮಗೀತೆ

ಸಂಸ್ಕ್ಕತಿ ಮರೆತ ಕನ್ನಡ ಇಲಾಖೆ          ಕಾಳಜಿಯಿಲ್ಲದ ಕರ್ಮಟ ಕನ್ನಡಿಗರು                 ಚೇತನ ಹೊಳೆಪ್ಪಗೋಳ ಬೆಳಗಾವಿ, 25: ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳುತ್ತಿರುವ ಸರ್ಕಾರಗಳು ಬೆಳಗಾವಿ ನಗರದಲ್ಲಿ ಕನ್ನಡ ಚಟುವಟಿಕೆಗಳಿಗೆ ನಿರ್ಮಿಸಿದ ವಡಗಾವಿಯಲ್ಲಿರುವ ಗಡಿ ಭವನ ಪಾಳು ಬಿದ್ದು ಹಲವಾರು ವರ್ಷ ಕಳೆದರೂ ಅದರತ್ತ ಗಮನ ಹರಿಸದೆ ಇರುವದು ಕನ್ನಡ ನೆಲದ ದುರಂತವಾಗಿದೆ. ಭವಿಷ್ಯದಲ್ಲಿ ಕನ್ನಡ ಕಾರ್ಯಕ್ರಮಗಳಿಗೆ ಅತ್ಯುತ್ತಮ ವೇದಿಕೆ ಎಂದುಕೊಂಡ ಗಡಿ ಭವನ ನಿರ್ಮಾಣವಾಗಿ 7 ವರ್ಷ ಕಳೆದರೂ ಉದ್ಘಾಟನೆಯೂ ಆಗದೆ ಕಳಾಹೀನವಾಗಿ ನಿಂತಿದೆ. [...]

Continue Reading →

27 ರಿಂದ ಕೇಂದ್ರದ ವಿರುದ್ಧ ಜೈಲ ಭರೋ

ಬೆಳಗಾವಿ 25- ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ರಾಷ್ಟ್ತ್ರೀಯ ಸುರಕ್ಷತೆಯನ್ನು ಕಡೆಗಣಿಸಿದೆ. ಬೆಲೆ ಏರಿಕೆಯ ನಿಯಂತ್ರಣಕ್ಕೆ ನಿರಾಸಕ್ತಿ ತೋರಿದೆ. ಕಾಂಗ್ರೆಸ್ ನಾಯಕರ ಹಗರಣ ಮಿತಿಮೀರಿದೆ. ಈ ಎಲ್ಲವನ್ನು ಖಂಡಿಸಿ ಬಿಜೆಪಿ ಬರುವ ದಿ.27 ರಿಂದ 29 ರವರೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜೈಲ ಭರೋ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಸಂಸದ ಸುರೇಶ ಅಂಗಡಿ ಇಂದಿಲ್ಲಿ ತಿಳಿಸಿದರು. ಅವರು ಶನಿವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತ, ಕಾಂಗ್ರೆಸ್ ನೇತೃತ್ವದಲ್ಲಿ ಯುಪಿಎ ಸರಕಾರ ತನ್ನಜನವಿರೋಧಿ ನೀತಿಯಿಂದಾಗಿ [...]

Continue Reading →

ಮೇ.30 ರಿಂದ ಶೈಕ್ಷಣಿಕ ವರ್ಷ ಆರಂಭ

ಬೆಳಗಾವಿ 25 :  2012-13  ಶೈಕ್ಷಣಿಕ ವರ್ಷ ಮುಗಿದಿದ್ದು ಬೇಸಿಗೆ ಬಿಡುವಿನ ನಂತರ 2013 -14ರ ಶೈಕ್ಷಣಿಕ ವರ್ಷ ಇದೇ ತಿಂಗಳು 31 ರಿಂದ ಆರಂಭವಾಗಲಿದೆ ಅಂದು ಸರಕಾರಿ ಶಾಲೆಗಳು ಪಾಠ ಪ್ರವಚನಗಳನ್ನು ಆರಂಭಿಸಲಿವೆ. ಇತ್ತಿಚಿನ ದಿನಗಳಲ್ಲಿ  ಸರಕಾರಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗ ತೋಡಗಿದೆ.  ಪಾಲಕರಲ್ಲಿ ತಮ್ಮ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಆಸಕ್ತಿ ಹೆಚ್ಚುತ್ತಿರುವದರಿಂದ ತಮ್ಮ ಆರ್ಥಿಕ ಪರಸ್ಥಿತಿ ಯಾವುದೇ ರೀತಿಯಲ್ಲಿ ಇರಲಿ ಸಾಲ ಮಾಡಿಯಾದರೂ ಮಕ್ಕಳನ್ನು ಉತ್ತಮ ಶಾಲೆಗೆ ಕಳುಹಿಸಿ, ಉತ್ತಮ [...]

Continue Reading →

ಬೆಳಗಾವಿಯನ್ನೂ ಬಿಡದ ಬೆಟ್ಟಿಂಗ ಭೂತ

ಕಣ್ಣುಮುಚ್ಚಿ ಕುಳಿತ ಪೊಲೀಸ ಇಲಾಖೆ ಬೆಳಗಾವಿ, 25: ಐಪಿಎಲ್ ಕ್ರಿಕೆಟ್ ಬೆಳಗಾವಿ ನಗರದ ಹುಡುಗರನ್ನು ಹಾಳು ಮಾಡುತ್ತಿದೆ. ಪ್ರತಿದಿನ ಲಕ್ಷಾಂತರ ರೂ ಗಳ ಬೆಟ್ಟಿಂಗ್ ವಹಿವಾಟು ಕಾಲೇಜು ವಿದ್ಯಾರ್ಥಿಗಳ ಓದು ಬರಹ ಬಿದಿಗಿಟ್ಟ ಹಗಲು ರಾತ್ರಿಯ ಚರ್ಚೆಯಾಗಿದೆ. ಪೋಲಿಸ್ ಇಲಾಖೆ ಮಾತ್ರ ದಿವ್ಯ ಮೌನದಲ್ಲಿದೆ. ಬೆಳಗಾವಿಯ ಮಾಳಮರುತಿ, ಟಿಳಕವಾಡಿ, ಮಾರ್ಕೆಟ್, ಖಡೇ ಬಜಾರ, ಶಹಾಪೂರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೆಟ್ಟಿಂಗ್ ನಿರಾತಂಕವಾಗಿ ನಡೆದಿದ್ದರೂ ಪೊಲೀಸರು ಮಾತ್ರ ಕಂಡೂ ಕಾಣದ ವರ್ತನೆಯಲ್ಲಿದ್ದಾರೆ. ಬೆಟ್ಟಿಂಗ್ ಅಂದರೆ ಶರತ್ತು. ಇದೊಂದು 20 [...]

Continue Reading →

ಪ್ರಾಥಮಿಕ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಣ ಸಚಿವರಿಗೆ ಮನವಿ

ಬೆಳಗಾವಿ 25- ರಾಜ್ಯದ ನೂತನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಕಿಮ್ಮನೆ ರತ್ನಾಕರರವರನ್ನು ಅಖಿಲ ಕರ್ನಾಟಕ ಪ್ರಾಥಮಿಕ ಶಿಕ್ಷಕ ಸಂಘದ ರಾಜ್ಯ ಘಟಕದ ಅಧ್ಯಕ್ಷರಾದ ಬಸವರಾಜ ಸುಣಗಾರರು ಸಂಘಟನೆಯ ಪರವಾಗಿ ಅಭಿನಂದಿಸಿದ್ದಾರೆ. ಅವರ ಅಧಿಕಾರದ ಅವಧಿಯಲ್ಲಿ ಪ್ರಾಥಮಿಕ ಶಿಕ್ಷಕರ ಸಮಸ್ಯೆಗಳೆಲ್ಲ ಪರಿಹಾರವಾಗಲೆಂದು ಆಶಿಸಿದ್ದಾರೆ. ಪ್ರಾಥಮಿಕ ಶಿಕ್ಷಣದಲ್ಲಿ ಆಗಬೇಕಾಗಿರುವ ಬದಲಾಣೆಗಳ ಕುರಿತು ವಿವರವಾಗಿ ಮನವಿಯಲ್ಲಿ ಬಸವರಾಜ ಸುಣಗಾರ ಸಲ್ಲಿಸಿದ್ದು. ಇಲಾಖೆಯು ಅವರ ಅಧಿಕಾರದ ಅವಧಿಯಲ್ಲಿ ಪ್ರಗತಿಸಾಧಿಸಲೆಂದು ಬಯಸಿ ದ್ದಾರೆ. ಬಸವರಾಜ ಸುಣಗಾರರು ಸಂಘಟನೆಯ ಪರ ವಾಗಿ [...]

Continue Reading →

ಲೋಕಾಯುಕ್ತ ಬಲೆಗೆ ಅಕೌಂಟಂಟ್

ಬೆಳಗಾವಿ 25: ಕೆರೆ ನಿರ್ಮಾಣದ ಅಂತಿಮ ಬಿಲ್ ಪಾವತಿಗೆ 15 ಸಾವಿರ ರೂ. ಲಂಚ ಕೇಳಿದ ಬೆಳಗಾವಿಯ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜೀನೀಯರ್ ಕಚೇರಿಯ ಅಕೌಂಟಂಟ್ ಗುರುರಾಜ ದೇಸಾಯಿ ಎನ್ನುವವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಎಚ್.ಜಿ.ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಧಾರವಾಡ ಮೂಲದ ವೆಂಕಟೇಶ್ ಎನ್ನುವ ಗುತ್ತಿಗೆದಾರರು ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ ಸವದತ್ತಿ ತಾಲೂಕಿನಲ್ಲಿ ಕೆರೆ ನಿರ್ಮಾಣದ ಕಾಮಗಾರಿ ಕೈಗೊಂಡಿದ್ದರು. ಕಾಮಗಾರಿಯ ಹಣ ಪಾವತಿಯಾಗಿದ್ದು ಅಂತಿಮ 50 [...]

Continue Reading →

ವಿಕಲಚೇತನರಿಗೆ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

ಬೆಳಗಾವಿ 25: ಜಿಲ್ಲೆಯ ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮತ್ತು ಅರ್ಹ ವಿಕಲಚೇತನರಿಗೆ ಆಧಾರ ಸಾದನ ಸಲಕರಣೆಗಳ ಮಂಜೂರಾತಿಗಾಗಿ 2013-14 ನೇ ಸಾಲಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸ್ತಕ ಅರ್ಹ ವಿಕಲಚೇತನರು ನಿಗದಿತ ಅರ್ಜಿ ನಮೂನೆಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಪಂಚಾಯತಿಯಲ್ಲಿರುವ ವಿವಿದೋದ್ದೇಶ ಪುನರ್ ವಸತಿ ಕಾರ್ಯಕರ್ತರನ್ನು ದೂರವಾಣಿ ಸಂಖ್ಯೆ 0831-2476096 ಸಂಪರ್ಕಿಸಬಹುದಾಗಿದೆ ಅಗಸ್ಟ್ 31 ಅರ್ಜಿ ಸ್ವೀಕರಿಸುವ ದಿನ ಕೊನೆಯದಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading →

ಟಯರಗಳ್ಳರ ಬಂಧನ: 5 ಲಕ್ಷ ಮೌಲ್ಯದ ವಸ್ತುಗಳ ವಶ

ಬೆಳಗಾವಿ, 25: ನಗರದ ಮಾಳಮಾರುತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಇಬ್ಬರ ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು 5 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ ವರಿಷ್ಠಾಧಿಕಾರಿ ಸಂದೀಪ ಪಾಟೀಲ ತಿಳಿಸಿದ್ದಾರೆ. ಬಂಧಿತರನ್ನು  ರಾಜು ಅಲಿಯಾಸ್ ಅಡಿವೆಪ್ಪ ಭರಮ ಕೋಲಕಾರ (23), ಸಾಜೀದ ಅಬ್ದುಲ್ ಮುನಾಫ್ ಶೇಖ (28) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ  ಕಳ್ಳತನವಾದ ಸುಮಾರು 3 ಲಕ್ಷ ಮೌಲ್ಯದ 16 ಟ್ರಕ್ ಟಯರ್ಗಳನ್ನು ಹಾಗೂ ಟಾಟಾ ಎಸ್ ವಾಹನ ರೂ. 2 [...]

Continue Reading →