ಹುಬ್ಬಳ್ಳಿಯಲ್ಲಿ ಮನೆ ತೆರವಿಗೆ ಕೋರ್ಟ್ ಆದೇಶ ಪಾಲಿಕೆ ಸದಸ್ಯನ ಮನೆಯೆದರು ಬೃಹತ್ ಪ್ರತಿಭಟನೆ
ಹುಬ್ಬಳ್ಳಿ,ಪೆ.01- ನ್ಯಾಯಾಲದ ಆದೇಶದಂತೆ ತೆರವು ಕಾರ್ಯಾಚರಣೆಯಿಂದ ಮನೆ ಕಳೆದುಕೊಳ್ಳುವ ಭೀತಿಯಲ್ಲಿರುವ ಬೆಂಗೇರಿ ಖಾದಿ ಗ್ರಾಮೋದ್ಯೌಗ ಸಂಘದ ಹಿಂಭಾಗ ದಲ್ಲಿನ ಗಾಂಧಿನಗರ ಕೊಳಚಿ ಪ್ರದೇಶದ ನಿವಾಸಿಗಳಿಂದು ಪಾಲಿಕೆ ಸದಸ್ಯ ಹೂವಪ್ಪ ದಾಯಗೋಡಿ ತಮಗೆ ವಂಚಿದಿದ್ದಾರೆಂದು ಆರೋಪಿಸಿ ಅವರ ನಿವಾಸದೆದುರು ಪ್ರತಿಭಟನೆ ನಡೆಸಿದರು. ಸುಮಾರು 108 ಬಡ ಕುಟುಂಬಗಳು ತಮ್ಮ ಮನೆ ನೆಲಸಮವಾಗುವ ಹಂತ ತಲುಪಿದ್ದು. ಇದಕ್ಕೆ ಜಾಗ ಖರೀದಿಯಲ್ಲಿ ಪಾಲಿಕೆ ಸದಸ್ಯ ದಾಯಗೋಡಿ ವಾಸ್ತವಿಕತೆಯನ್ನು ಮರೆಮಾಚಿ ತಮಗೆ ಮಂಚನೆ ಗೈದಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು. ಬೆಂಗೇರಿ ಗ್ರಾಮದ ಸರ್ವೆ ನಂ. [...]



Recent Comments