Archive | ಗೋಕಾಕ RSS feed for this section

ಸರ್ವಾಧ್ಯಕ್ಷರಾಗಿ ಬಾಳೇಶ ಲಕ್ಷೆಟ್ಟಿ ಆಯ್ಕೆ

ಮೂಡಲಗಿ: ಜೂನ್ 9ರಂದು ಮೂಡಲಗಿಯಲ್ಲಿ ಜರುಗಲಿರುವ ಗೋಕಾಕ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ದ ತಾಲ್ಲೂಕಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ತಾಲ್ಲೂಕಿನ ಹಿರಿಯ ಸಾಹಿತಿ ಬಾಳೇಶ ಲಕ್ಷೆಟ್ಟಿ ಅವರು ಆಯ್ಕೆ ಮಾಡಲಾಗಿದೆ ಎಂದು ಕ.ಸಾ.ಪ. ಅಧ್ಯಕ್ಷ ಬಾಲಶೇಖರ ಬಂದಿ ಅವರು ತಿಳಿಸಿದ್ದಾರೆ. ಸೋಮವಾರದಂದು ಮೂಡಲಗಿಯಲ್ಲಿ ಜರುಗಿದ ಕ.ಸಾ.ಪ. ತಾಲ್ಲೂಕಾ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯನ್ನು ತೆಗೆದುಕೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ. ಸದ್ಯ 78 ವಸಂತಗಳನ್ನು ಕಂಡಿರುವ ಬಾಳೇಶ ಲಕ್ಷೆಟ್ಟಿ ಅವರು 34 ವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನು ಮಾಡಿ ವಿಶ್ರಾಂತಿ [...]

Leave a comment Continue Reading →

ಮೂಡಲಗಿ : ವಿಮಾ ಪರಿಹಾರ ಚೆಕ್ ವಿತರಣೆ

ಮೂಡಲಗಿ: ಇಲ್ಲಿಯ ಶ್ರೀ ಶಿವಬೋಧರಂಗ ಅರ್ಬನ್ ಕೊ-ಆಫ್ ಕ್ರೆಡಿಟ್ ಸೊಸಾಯಟಿಯಲ್ಲಿ ಸಂಘವು ತನ್ನ ಶೇರುದಾರರಿಗೆ ಜಾರಿಗೆ ತಂದ ವಿಮಾ ಯೋಜನೆಯ ಪರಿಹಾರದ ಚೆಕ್ಕ ವಿತರಿಸಲಾಯಿತು. ಸಂಘದ ಚೇರಮನ ಅಶೋಕ.ಎಮ್.ಹೊಸೂರ ರೂ.25 ಸಾವಿರಗಳ ಚೆಕ್ ವಿತರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ,ನಮ್ಮ ಸೊಸಾಯಟಿಯು ವಿಮಾ ಯೋಜನೆಯನ್ನು ಮೂಡಲಗಿಯಲ್ಲಿ ಪ್ರಥಮ ಬಾರಿಗೆ ಜಾರಿಗೆ ತಂದಿದ್ದು, ಪ್ರತಿಯೊಂದು ಎ ಗ್ರೇಡ್  ಶೇರುದಾರರ ವಿಮಾ ಮೊತ್ತವನ್ನು ಸಂಘವೇ ತುಂಬುವದು. ಪಾಲಸಿದಾರ  ಸಾವನ್ನಪ್ಪಿದರೆ ಬಜಾಜ ಅಲೈಂಜಿ ಕಂಪನಿಯವರು ರೂ 25 ಸಾವಿರಗಳ ಚೆಕ್ಕನ್ನು ಮೃತ ವಾರಸುದಾರ  [...]

Leave a comment Continue Reading →

ಗೋಕಾಕ ಪಟ್ಟಣದಲ್ಲಿ ಮನೆಗಳ್ಳತನ: ಪೋಲಿಸರ ನಿರ್ಲಕ್ಷ್ಯ

ಗೋಕಾಕ;, 21 ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸರ ಪಾತ್ರ ಮುಖ್ಯ. ಆದರೆ  ಇದಕ್ಕೆ ಅಪವಾದವೆಂಬಂತೆ ಇಲ್ಲಿಯ  ಶಹರ ಪೊಲೀಸ್ ಠಾಣೆಯ ಪೊಲೀಸರ ಕಾರ್ಯನಿರ್ವಹಣೆಯ ಮೇಲೆ ಅನುಮಾನ ಮೂಡಿದೆ. ನಗರ ಪ್ರದೇಶದ ವಿವಿಧ ಬಡಾವಣೆಗಳಲ್ಲಿ ಹಗಲು ಸಮಯದಲ್ಲಿ ಕಳ್ಳತನ ನಡೆಯುತ್ತಿದ್ದರೂ ಅವುಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಹಲವಾರು  ಸರಗಳ್ಳತನ, ಮನೆ ಕಳ್ಳತನ ಪ್ರಕರಣಗಳು ನಡೆದರೂ ಪ್ರಕರಣ ದಾಖಲಿಸದಿರುವುದು ಅವುಗಳಿಗೆ ಕುಮ್ಮಕ್ಕು ನೀಡುವಂತಿದೆ ಪೊಲೀಸರ ನಡೆ. ಪ್ರಕರಣ ದಾಖಲಿಸಿಕೊಂಡರೆ, ಅವುಗಳನ್ನು [...]

Leave a comment Continue Reading →

ಪ್ರಾಚಾರ್ಯ ಕೊಕಟನೂರಗೆ ಪ್ರಶಸ್ತಿ ಪ್ರದಾನ

ಮೂಡಲಗಿ: ಬೆಂಗಳೂರಿನ ಸಮಾಜ ಕಲ್ಯಾಣ ಸಂಸ್ಥೆಯವರು ಕೊಡಮಾಡುವ 2012-13ನೇ ಸಾಲಿನ ಶಿಕರ್ನಾಟಕ ಶಿಕ್ಷಣ ರತ್ನಷಿ ಪ್ರಶಸ್ತಿಯನ್ನು  ಮೂಡಲಗಿಯ ಶ್ರೀ ಶ್ರೀಪಾದಬೋಧ ಸ್ವಾಮಿಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್. ಬಿ. ಕೊಕಟನೂರ ಇವರಿಗೆ ನೀಡಿ ಗೌರವಿಸಿದ್ದಾರೆ. ಕೊಕಟನೂರ ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಸಮಾಜ ಕಲ್ಯಾಣ ಸಂಸ್ತೆಯವರು ನೀಡುವ ಪ್ರಶಸ್ತಿಗೆ ಭಾಜನರಾದ ಆರ್. ಬಿ. ಕೊಕಟನೂರ ಅವರನ್ನು ಶ್ರೀಪಾದಬೋಧ ಸ್ವಾಮಿಜಿ, ಮಹಾವಿದ್ಯಾಲಯದ ಸಲಹಾ ಸಮಿತಿಯ ಅಧ್ಯಕ್ಷರು, ಎಲ್ಲ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Leave a comment Continue Reading →

ಧರ್ಮದ ಶ್ರೀರಕ್ಷೆ ಅಗತ್ಯ ಅರಭಾವಿಯಲ್ಲಿ ಶಿವಾನುಭವಗೋಷ್ಠಿ

ಘಟಪ್ರಭಾ 20: ಪಾಪ ಕರ್ಮಗಳಿಂದ ದೂರವಿರಲು ಧರ್ಮದ ಶ್ರೀರಕ್ಷೆ ಅಗತ್ಯ ಎಂದು ಬಂಡಿಗಣಿಯ ಬಸವಗೋಪಾಲ ನೀಲ ಮಾನಿಕ ಮಠದ ಚಕ್ರವರ್ತಿ ಶ್ರೀ ದಾನೇಶ್ವರರು ನುಡಿದರು. ಅವರು ಸಮೀಪದ ಅರಭಾಂವಿ ಗ್ರಾಮದ ಬಬಲಾದಿ ಶ್ರೀ ಸದಾಶಿವ ದೇವರ ಜಾತ್ರೆ ನಿಮಿತ್ಯ ಹಮ್ಮಿಕೊಂಡ ಶಿವಾನುಭವ ಗೋಷ್ಠಿ ಮತ್ತು ಪಾರಮಾರ್ಥಿಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು. ಬೀರ್ನಾಳದ ಶ್ರೀಗಳು, ಉಪನ್ಯಾಸಕ ಎನ್.ಬಿ.ಕಾಡದೇವರ, ಸುಮಂಗಲಾ ತಾಯಿ ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ ಭಕ್ತಿ ಸೇವೆ ಸಲ್ಲಿಸಿದ ಗಣ್ಯರನ್ನು ಸತ್ಕರಿಸಲಾಯಿತು. ವೇದಿಕೆ [...]

Leave a comment Continue Reading →

ಶ್ರೀ ನಿಧಿ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಗೋಕಾಕ20-ಗ್ರಾಮೀಣ ಶಿಕ್ಷಣ ಅಭಿವ್ಕದ್ದಿ ಸಂಸ್ಥೆಯಿಂದ 2012-13ನೇ ಸಾಲಿಗಾಗಿ ವಿವಿಧ ಕ್ಷೇತ್ರದಲ್ಲಿ  ಸಾಧನೆ ಮಾಡುತ್ತಿರುವ ಸಾಧಕರಿಗೆ ಕೊಡಮಾಡುವ ಜಿಲ್ಲಾ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ಶ್ರೀನಿಧಿ ಪುರಸ್ಕಾರಕ್ಕೆ ಆರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಕೆ.ಕೆ ಘೀವಾರಿ ಅವರು  ಪ್ರಕಟಣೆಯ ಮೂಲಕ ತಿಳಿಸಿದ್ದಾರೆ . ಶಿಕ್ಷಣ,ಸಾಹಿತ್ಯ ಸಂಗತ ,ಚಿತ್ರಕಲೆ, ಶಿಲ್ಪಕಲೆ ರಂಗಭೂಮಿ, ಕ್ರೀಡೆ ,ಜನಪದ ಸಮಾಜಸೇವೆ, ಕ್ಕಷಿಕ್ಷೇತ್ರ ಹಾಗೂ  ವೈದ್ಯಕೀಯ ಇವುಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಪ್ರಗತಿಗೆ ಎಲೆ ಮರೆಯ ಕಾಯಿಯಂತೆ ದುಡಿಯುತ್ತಿರುವ ಮಹನೀಯರು [...]

Leave a comment Continue Reading →

ಜಾತ್ರೆ ನಿಮಿತ್ಯ ಸ್ಪರ್ಧೆಗಳು

ಮೂಡಲಗಿ 20: ಸ್ಥಳೀಯ ಶ್ರೀ ಶಿವಬೋಧರಂಗ ಸ್ವಾಮಿಜಿಗಳವರ ಪುಣ್ಯಾರಾಧನೆ ಮಹೋತ್ಸವದ ನಿಮಿತ್ಯ ದಿ.21 ರಂದು ಮುಂಜಾನೆ 10 ಗಂಟೆಗೆ 1 ನಿಮಿಷದ ಬಂಡೆ ಶರ್ತುಗಳು ಸುಣದೋಳಿ ರಸ್ತೆಯ ನಾಗನ್ನವರ ತೋಟದಲ್ಲಿ ಜರುಗುವವು. ವಿಜೇತರಾದವರಿಗೆ ರೂ 25000, 15000,10000,5000 ಮತ್ತು 2500 ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ  ಮತ್ತು ಸಮಾಧಾನಕರ ಬಹುಮಾನಗಳನ್ನು ನೀಡಲಾಗುವದು. ದಿ.22 ರಂದು  ಮುಂಜಾನೆ 10 ಕ್ಕೆ  ತೆರೆ ಬಂಡಿ ಶರ್ತುಗಳು ಎಸ್.ಎಸ್.ಆರ್ ಹೈಸ್ಕೂಲ್ ಮೈದಾನದಲ್ಲಿ ನಡೆಯುವವು. ವಿಜೇತರಿಗೆ ರೂ.25000, 15000, 10000, 5000, [...]

Leave a comment Continue Reading →

ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ಅರ್ಜಿ

ಗೋಕಾಕ 20: ತಾಲೂಕಿನ ಸನ್ 2013-14ನೇ ಸಾಲಿಗಾಗಿ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ನಡೆಸಲ್ಪಡುವ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಣವನ್ನು ಮುಂದುವರಿಸಲು ಶಾಲೆಗಳು ಇಲ್ಲದೇ ಇರುವ ಗ್ರಾಮಗಳಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಅವರ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಲು ಅನುಕೂಲ ಕಲ್ಪಿಸಿ ಕೊಡಲಾಗುವುದು.ಈ ವಸತಿ ನಿಲಯದಲ್ಲಿ 5ರಿಂದ 10 ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ [...]

Leave a comment Continue Reading →

ಶಿವಬೋಧರಂಗನ ಜಾತ್ರೆ

ವಿಜೃಂಭಣೆಯ ಪಾಲಕಿ ಉತ್ಸವ ಮೂಡಲಗಿ 20: ಭಾವೈಕ್ಯತೆಗೆ ಹೆಸರಾಗಿರುವ ಇಲ್ಲಿಯ ಆರಾಧ್ಯ ದೈವ ಶ್ರೀ ಶಿವಬೋಧರಂಗನ  ಜಾತ್ರಾ ಮಹೋತ್ಸವದ ಪಾಲಕಿ ಉತ್ಸವವು  ಅಪಾರ ಭಕ್ತರ ಸಮೂಹ ಮತ್ತು  ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ಸೋಮವಾರ ನಡೆದು ಭಕ್ತಿಯ ಪರಕಾಷ್ಠತೆಗೆ ಸಾಕ್ಷಿಯಾಯಿತು. ಮುಂಜಾನೆ 8 ಕ್ಕೆ ಕೆಳಗಿನ ಮಠದಲ್ಲಿ ಲಘುರುದ್ರ ನಡೆಯಿತು. ಮೇಲಿನ ಮಠದಲ್ಲಿ ಪಲ್ಲಕ್ಕಿಯನ್ನು  ಶೃಂಗರಿಸಲಾಗಿತ್ತು. ಶ್ರೀಪಾದಬೋಧ ಸ್ವಾಮಿಜಿಗಳು ಪೂಜೆಯ  ವಿಧಿವಿಧಾನಗಳನ್ನು ನರೆವೇರಿಸಿದರು. ಪಾಲಕಿ ಉತ್ಸವಕ್ಕೆ ನಂತರ ಶ್ರೀಗಳು ಚಾಲನೆ ನೀಡಿದರು.  ಅಪಾರ ಜನಸ್ತೌಮ ಮತ್ತು ಭಕ್ತಿಯ ಝೆಂಕಾರಗಳ ಘೋಷಣೆಗಳು [...]

Leave a comment Continue Reading →

ಪ್ರತಿಭೆಗೆ ಪರೀಕ್ಷೆ ಮಾನದಂಡವಾಗದಿರಲಿ

ಮೂಡಲಗಿ 19: ಮಕ್ಕಳ ಪ್ರತಿಭೆಗೆ ಪರೀಕ್ಷೆಗಳೆ ಮಾನದಂಡಗಳಾಗಬಾರದು ಅದರ ಬದಲಿಗೆ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆ ಹೊರಹಾಕಲು ಅವಕಾಶ ನೀಡುವಂತಹದಾಗಿರಬೇಕು. ಮಕ್ಕಳಿಗೆ ಪ್ರೌತ್ಸಾಹಿಸುವಲ್ಲಿ ಪಾಲಕರು ಶಿಕ್ಷಕರು ಹಾಗೂ ಸಮಾಜವು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆಂದು ಧಾರವಾಡದ ಬಾಲವಿಕಾಸ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಶಂಕರ ಹಲಗತ್ತಿ ಹೇಳಿದರು. ಅವರು ಬಾಲವಿಕಾಸ ಅಕಾಡೆಮಿ,  ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಹಾಗೂ  ಚೈತನ್ಯ ಗ್ರುಪ್ಸ್ ಸಂಯುಕ್ತಾಶ್ರಯದಲ್ಲಿ  ಚೈತನ್ಯ ಶಾಲೆಯಲ್ಲಿ ಹಮ್ಮಿಕೊಂಡ  “ಮಕ್ಕಳ ಪ್ರತಿಭಾ ವಿಕಾಸ ಶಿಬಿರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಮಕ್ಕಳು [...]

Leave a comment Continue Reading →